ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಲ್ಪಾದೆ ವಸತಿ ಸಮುಚ್ಚಯಕ್ಕೆ ಸಯ್ಯದ್ ಕೂರ ತಂಙಳರಿಂದ ಶಿಲಾನ್ಯಾಸ

ದೇರಳಕಟ್ಟೆ : ಬೆಳ್ಮ ಗ್ರಾಮ ವ್ಯಾಪ್ತಿಯ ಕಲ್ಪಾದೆ ಎಂಬಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮುಹಿಯದ್ದೀನ್ ಜುಮಾ ಮಸ್ಜಿದ್ ಹಾಗೂ ನೂರುಲ್ ಹುದಾ ಮದರಸ ಇದರ ವತಿಯಿಂದ ನಿರ್ಮಾಣವಾಗಲಿರುವ ನೂತನ ವಸತಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಶುಕ್ರವಾರದಂದು ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ಇವರ ಪುಣ್ಯ ಹಸ್ತದಿಂದ ಜನಾಬ್ ಹೈದರ್ ಪರ್ತಿಪ್ಪಾಡಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು       ಜಮಾಅತ್ ವ್ಯಾಪ್ತಿಯಲ್ಲಿ ಸುಮಾರು ಎಂಬತ್ತರಷ್ಟು ಮನೆಗಳಿದ್ದು, ಮದರಸದಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ಕಲಿಯುತಿದ್ದು,ಮೂರು ಉಸ್ತಾದರುಗಳು ಸೇವೆ ಸಲ್ಲಿಸುತಿದ್ದಾರೆ,ಹತ್ತಾರು ವಿದ್ಯಾರ್ಥಿಗಳು ಕರ್ನಾಟಕ, ಕೇರಳದ ಪ್ರಮುಖ ವಿದ್ಯಾಬ್ಯಾಸ ಕೇಂದ್ರಗಳಲ್ಲಿ ದರ್ಸ್ ವಿದ್ಯಾಬ್ಯಾಸ ನಡೆಸುತ್ತಿದ್ದಾರೆ. ಮಸೀದಿಯ ವರಮಾನದ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಊರ ಪರವೂರಿನವರು ತನು,ಮನ,ಧನಗಳಿಂದ ಸಹಾಯಾಡಿದ್ದು ಇನ್ನಷ್ಟು ಸಹಾಯದ ಆವಶ್ಯಕತೆ ಇದ್ದು ಸರ್ವರ ಸಹಕಾರದ ನಿರೀಕ್ಷೆ ಜಮಾಅತ್ ಸಮಿತಿಗೆ ಇದೆ.         ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರಾದ ಬಹುಮಾನ್ಯ ಶರಫುದ್ದೀನ್ ಫಾಳಿಲಿ ಮಲಪ್ಪುರಂ,ಮಸೀದಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಝಾಕ್, ಕಾರ್ಯದರ್ಶಿ ಮುಹಮ್ಮದ್ ಫಯಾಝ್, ಸದರ್ ಮುಅಲ್ಲಿಂ ಬಹುಮಾನ್ಯ ಹನೀಫ್ ನಿಝಾಮಿ ಅಸೈ, ಮುಅಝ್ಜಿನ್ ಬಹುಮಾನ್ಯ ರಿಯಾಝ್ ಬಾಹಸನಿ, ಮಸ...